ಪೋಸ್ಟ್‌ಗಳು

ನವೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Guava Benefits: ಸೀಬೆ ಹಣ್ಣು ಎಂಬ ʻಸೂಪರ್‌ ಫುಡ್ʼ; ಇದು ಔಷಧೀಯ ಗುಣಗಳ ಕಣಜ!

ಇಮೇಜ್
  ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು (guava benefits) ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಪೇರಳೆ ಅಥವಾ ಸೀಬೇಹಣ್ಣು ಅಥವಾ ಚೇಪೇಕಾಯಿ ʻಹಣ್ಣುಗಳ ರಾಣಿʼ ಎಂಬುದು ನಿಮಗೆ ಗೊತ್ತೇ? ಹೌದು. ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳಿಗೆ, ಉರಿಯೂತಗಳು, ಋತುಗಳಿಗನುಸಾರವಾಗಿ ವಕ್ಕರಿಸುವ ಸಾಮಾನ್ಯ ರೋಗಗಳನ್ನು (guava benefits) ಬಡಿದಟ್ಟುವ ಗುಣವಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮಧುಮೇಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಅದಕ್ಕೇ ಸೀಬೆ ಹಣ್ಣುಗಳ ರಾಣಿ! ಆದರೆ, ಸೀಬೆ ಹಣ್ಣನ್ನು ಕಂಡರೆ ನಮಗ್ಯಾಕೋ ಸದರ. ಮಾರುಕಟ್ಟೆಯಲ್ಲಿ ಯಾವು ಯಾವುದೋ ಊರುಗಳಿಂದ ಲಗ್ಗೆಯಿಡುವ ಥಳಥಳಿಸುವ ಸ್ಟಿಕ್ಕರ್‌ ಅಂಟಿಸಿ ಬರುವ ಹಣ್ಣುಗಳನ್ನು ತಿನ್ನುವ ನಾವು, ಮನೆಯಂಗಳದಲ್ಲೇ ಬೆಳವ, ಸ್ಥಳೀಯ ಹಣ್ಣಾದ ಸೀಬೆಯ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಆದರೆ, ಸೀಬೆಯ ಗುಣಗಳನ್ನು ತಿಳಿದರೆ, ನಾವು ಯಾಕೆ ಈ ಹಣ್ಣನ್ನು ತಿನ್ನುವುದು ಅಗತ್ಯ ಎಂಬ ಮನವರಿಕೆಯಾದೀತು. ಬನ್ನಿ, ಸೀಬೆ ಹಣ್ಣಿನ ಅದ್ಭುತ ಲಾಭಗಳನ್ನು ತಿಳಿ...

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

ಇಮೇಜ್
  ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಉಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ. ದೇಹದಲ್ಲಾಗುವ ಯಾವುದೇ ರಾಸಾಯನಿಕ ಪ್ರಕ್ರಿಯೆಗೂ ನಾವು ಸೇವಿಸುವ ಆಹಾರ, ಗಾಳಿ, ನೀರಿನ ಅವಶ್ಯಕತೆ ಇದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ (Health Tips) ನಾವು ಉತ್ತಮ ಆಹಾರ (Healthy Food) ಸೇವಿಸಲೇಬೇಕು ಎಂಬ ಸತ್ಯ ನಮಗೆ ತಿಳಿದಿದೆ. ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವಿಸುವುದಷ್ಟೇ ಅಲ್ಲ, ಈಗ ನಾವು ಸಂಸ್ಕರಿಸಿದ ಆಹಾರಗಳನ್ನೂ ಸಾಕಷ್ಟು ಹೊಟ್ಟೆಗಿಳಿಸುತ್ತಿದ್ದೇವೆ. ಪ್ಯಾಕೆಟ್ಟುಗಳಲ್ಲಿ ಸುಲಭವಾಗಿ ದೊರೆಯುವ ಆಹಾರ, ಅರ್ಧ ತಯಾರಿಸಲ್ಪಟ್ಟ ರೆಡಿ ಟು ಈಟ್‌ಗಳು ಸೇರಿದಂತೆ ನಾನಾ ಬಗೆಯಲ್ಲಿ ನಮ್ಮ ದೇಹಕ್ಕೆ ಸಂಸ್ಕರಿಸಿದ ಆಹಾರ (processed food) ಸೇರುತ್ತದೆ. ಆಹಾರವನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಅದರೊಳಗೆ ಯಾವೆಲ್ಲ ವಸ್ತುಗಳನ್ನು ಬಳಸಿದ್ದಾರೆ, ಯಾವೆಲ್ಲ ವಸ್ತುಗಳನ್ನು ಹಾಕಿ ಆ ವಸ್ತು ತಯಾರಿಸಲಾಗಿದೆ ಅಥವಾ ಅದರಲ್ಲಿರುವ ಪೋಷಕಾಂಶಗಳ ಪ್ರವಾಣಗಳೆಷ್ಟು ಎಂಬ ಯಾವ ವಿಚಾರವನ್ನೂ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಎಲ್ಲರೂ ಖರೀದಿಸುತ್ತೇವೆ. ಮಕ್ಕಳಿಗೂ ಪ್ಯಾಕೆಟ್ಟುಗಳನ್ನು ಖರೀದಿಸಿ ಕೊಡುತ್ತೇವೆ. ಸುಲಭವಾಗಿ ದೊರೆಯುವಾಗ, ಕಷ್ಟಪಟ್ಟು ಮಾಡುವ ಅಭ್ಯಾಸ ಬಹುತೇಕ ಮರೆತೇ ಹೋಗಿದೆ. ಅಥವಾ ಒಂದಿಷ...

Winter Morning: ಚಳಿಯಿದ್ದರೇನಂತೆ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಇಮೇಜ್
  ಚಳಿಗಾಲವೆಂದು ಬೆಚ್ಚಗೆ ಮುದುಡಿ (winter morning) ಮಲಗುವುದಕ್ಕಿಂತ, ಬೇಗನೆ ಎದ್ದು ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆಗುವ ಆರೋಗ್ಯದ ಲಾಭಗಳನ್ನು (Health tips) ಇಲ್ಲಿ ನೋಡೋಣ ಬನ್ನಿ. ಬೇಗ ಬೆಳಗ್ಗೆ ಏಳುವುದು ಅದರಲ್ಲೂ ಚಳಿಗಾಲದಲ್ಲಿ (Winter Morning) ಎಷ್ಟು ಕಷ್ಟ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ನಿತ್ಯವೂ ಒಂದೇ ಸಮಯಕ್ಕೆ ಚೆನ್ನಾಗಿ ಹೊದ್ದು ಮಲಗಿದಲ್ಲಿಂದ ಸೋಮಾರಿತನ (Laziness) ಬಿಟ್ಟೇಳುವುದು ಎಂದರೆ, ಅದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಮಾನಸಿಕ ತಯಾರಿ ಬೇಕು. ಮನಸ್ಸು ಬುದ್ಧಿಯ ಮಾತು ಇಲ್ಲಿ ಕೇಳದು. ಬುದ್ಧಿ ಬೇಗ ಏಳು ಎಂದರೆ, ಮನಸ್ಸು ಮಾತ್ರ ಹಾಸಿಗೆಯಲ್ಲಿ ಬೆಚ್ಚಗೆ ಮುದುಡಿ ಮಲಗುವ ಕನಸು ಕಾಣುತ್ತದೆ. ಬುದ್ಧಿ ಮನಸ್ಸಿನೆದುರು ಸೋಲುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಚೆನ್ನಾಗಿ ತಿಂದುಂಡು ಮಲಗಿ ಎದ್ದು, ಸೋಮಾರಿತನ ಮೈಗೂಡಿಸಿಕೊಂಡು ಆರಾಮವಾಗಿದ್ದುಕೊಂಡು ಮೈತುಂಬಿಸಿಕೊಂಡು ತೂಕ ಹೆಚ್ಚಿಸಿಕೊಳ್ಳುವವರೇ (Weight gain) ಜಾಸ್ತಿ. ಹೀಗಿದ್ದಾಗ ಬೇಗ ಏಳುವ ಬಗ್ಗೆ ಕೊಡುವ ಪ್ರವಚನವನ್ನು ಕೇಳುವವರ್ಯಾರು ಅಲ್ಲವೇ? ಅನಿವಾರ್ಯವಾಗಿ ಆಫೀಸಿಗೆ ಒಂದೇ ಸಮಯಕ್ಕೆ ಬೇಗ ಎದ್ದು ಹೊರಡಬೇಕಾಗುವವರು, ಶಾಲೆಗೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತ ತಾಯಂದಿರು ಹೀಗೆ ಅನೇಕ ಜವಾಬ್ದಾರಿಗಳ ಮಂದಿ ಖಂಡಿತವಾಗಿಯೂ ಕಷ್ಟಪಟ್ಟಾದರೂ ಏಳುವವರೇ. ಯಾಕೆಂದರೆ ಮಾಡದೆ ವಿಧಿಯಿಲ್ಲ. ಆದರೆ, ಇವೆ...

Amla Benefits: ನೆಲ್ಲಿಕಾಯಿಯನ್ನು ಮರೆತರೆ ನಿಮ್ಮ ಆರೋಗ್ಯದ ಕಾಳಜಿಯನ್ನೇ ಮರೆತಂತೆ!

ಇಮೇಜ್
  ನೆಲ್ಲಿಕಾಯಿಯ ಸೇವನೆಯಿಂದ ವಿಟಮಿನ್‌ ಸಿ ಲಾಭಗಳನ್ನು (Amla Benefits) ಪಡೆಯಬಹುದು. ಇದರಿಂದ ರೋಗ ನಿರೋಧಕತೆ ಹೆಚ್ಚುವುದಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಆರೋಗ್ಯವೂ ಸಾಕಷ್ಟು ವೃದ್ಧಿಸುತ್ತದೆ. ಬೆಟ್ಟದ ನೆಲ್ಲಿಕಾಯಿ (Amla, Indian Gooseberry) ಎಂಬುದು ನಮ್ಮ ಪೂರ್ವಜರ ಕಾಲದಿಂದಲೂ ನಾವು ಬಳಸಿಕೊಂಡು ಬಂದ ಆಹಾರ. ಇದರ ಪ್ರಯೋಜನಗಳು (Amla Benefits) ಅನೇಕ. ಆಹಾರವಾಗಿಯೂ ನಾವು ಮೊದಲಿನಿಂದ ಬಳಕೆ ಮಾಡುತ್ತಲೇ ಬಂದರೂ, ಇದರ ಬಳಕೆ ನಿತ್ಯಜೀವನದಲ್ಲಿ ಮಾಡುವವರು ಕಡಿಮೆ. ಆಯುರ್ವೇದದಲ್ಲೂ ನೆಲ್ಲಿಕಾಯಿಗೆ ಮಹತ್ವದ ಸ್ಥಾನವಿದೆ. ಅದು, ನೆಲ್ಲಿಕಾಯಿಯನ್ನು ನಿತ್ಯವೂ ತಿನ್ನುವುದರಿಂದ ಆರೋಗ್ಯವೃದ್ಧಿಯಾಗುತ್ತದೆ ಎನ್ನುತ್ತದೆ. ನೆಲ್ಲಿಕಾಯಿಯಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುವುದಲ್ಲದೆ, ಪಚನಕ್ರಿಯೆಯೂ ಚುರುಕಾಗುತ್ತದೆ. ಮಲಬದ್ಧತೆ ದೂರವಾಗಿ ಚರ್ಮ, ಕೂದಲ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಆಯುಸ್ಸೂ ವೃದ್ಧಿಯಾಗುತ್ತದೆ. ಈ ನೆಲ್ಲಿಕಾಯಿಯ ಉಪಯೋಗಗಳನ್ನು ತಿಳಿಯದವರಿಲ್ಲ. ಆದರೆ, ತಿನ್ನಲು ಮಾತ್ರ ಮನಸ್ಸು ಮಾಡುವುದೂ ಇಲ್ಲ. ಹಾಗಾದರೆ ಬನ್ನಿ, ನೆಲ್ಲಿಕಾಯಿಯನ್ನು ತಿನ್ನುವುದರಿಂದ ಏನೆಲ್ಲ ಉಪಯೋಗಗಳನ್ನು ನಾವು ಪಡೆಯಬಹುದು (Amla health benefits) ಎಂಬುದನ್ನು ನೋಡೋಣ. 1. ನೆಲ್ಲಿಕಾಯಿಯಲ್ಲಿರುವಷ್ಟು ವಿಟಮಿನ್‌ ಸಿ (Vitamin C) ಕಿತ್ತಳೆಯಲ್ಲೂ ಇಲ್ಲ. ಹಾಗಾಗಿ ನೆಲ್ಲಿಕಾಯಿ ನೈಸರ್ಗಿಕವಾಗಿ ಲಭ್ಯವಿರುವ ವಿಟಮಿನ್‌...

How To Look Younger: ನಲವತ್ತು ದಾಟಿದರೂ ʼಯಂಗ್‌ʼ ಆಗಿ ಇರಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

ಇಮೇಜ್
  ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಗಡಿಬಿಡಿಯಲ್ಲಿ, ಎಡೆಬಿಡದ ಕೆಲಸದ ನಡುವೆ ವಯಸ್ಸು ನಲವತ್ತು ಬಿಡಿ, ಐವತ್ತು ದಾಟುವುದೂ (how to look younger) ಕೂಡಾ ಗೊತ್ತಾಗದು. ಅಷ್ಟರಲ್ಲಿ ಸಮಯ ಮೀರಿರುತ್ತದೆ ಅಷ್ಟೆ. ಹಾಗಾಗಿ ಮೊದಲೇ ಎಚ್ಚೆತ್ತುಕೊಳ್ಳಿ. ನಲವತ್ತು ವರ್ಷ ಹತ್ತಿರ ಬರುತ್ತಿದ್ದಂತೆ, ಇಷ್ಟರವರೆಗೆ ಖುಲ್ಲಂಖುಲ್ಲಾ ಇದ್ದವರಿಗೆಲ್ಲ ವಯಸ್ಸಾಗುತ್ತಿರುವ ಸೂಚನೆ ಕಾಣಿಸತೊಡಗುತ್ತದೆ. ಚರ್ಮದಲ್ಲಿ ನಿರಿಗೆ, ಚರ್ಮದಲ್ಲಿ ಕಪ್ಪು ಚುಕ್ಕೆಗಳು, ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸಲು ಸಾಧ್ಯವಾಗದಿರುವುದು, ಹಾರ್ಮೋನಿನ ಸಮಸ್ಯೆಗಳು ಇತ್ಯಾದಿ ಇತ್ಯಾದಿ. ಹೆಣ್ಣುಮಕ್ಕಳಿಗೆ ಕೆಲವು ಸಮಸ್ಯೆಗಳಾದರೆ, ಗಂಡು ಮಕ್ಕಳ ಸಮಸ್ಯೆ ಮತ್ತೊಂದು ಬಗೆಯದು. ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಗಡಿಬಿಡಿಯಲ್ಲಿ, ಎಡೆಬಿಡದ ಕೆಲಸದ ನಡುವೆ ವಯಸ್ಸು ನಲವತ್ತು ಬಿಡಿ, ಐವತ್ತು ದಾಟುವುದೂ ಕೂಡಾ ಗೊತ್ತಾಗದು. ಅಷ್ಟರಲ್ಲಿ ಸಮಯ ಮೀರಿರುತ್ತದೆ ಅಷ್ಟೆ. ಯಾರೋ ಕಾಲೇಜು ಗೆಳೆಯನೋ ಗೆಳತಿಯೋ ಅಚಾನಕ್ಕಾಗಿ ಎಷ್ಟೋ ವರ್ಷಗಳ ನಂತರ ಸಿಕ್ಕಿ, ಅರೆ, ಈತ/ಈಕೆ ಈಗಲೂ ಅದ್ಹೇಗೆ ಕಾಲೇಜಿನಲ್ಲಿದ್ದ ಹಾಗೇ ಇದ್ದಾನಲ್ಲಾ/ಳಲ್ಲಾ, ನಾನ್ಯಾಕೆ ಸಂಸಾರ ಸಾಗರದದಲ್ಲಿ ಮುಳುಗಿ ಹೀಗಾಗಿಬಿಟ್ಟೆ ಎಂದೂ ಅನಿಸುವ ಸನ್ನಿವೇಶವೂ ಬರುವುದುಂಟು. ಅದಕ್ಕಾಗಿಯೇ, ಇಂಥ ಸನ್ನಿವೇಶ ಬರುವ ಮೊದಲೇ ಎಚ್ಚೆತ್ತುಕೊಂಡು ನಲುವತ್ತಾಗುವಾಗಲೇ ನಮ್ಮ ದೇಹ, ಆರೋಗ್ಯವನ್ನು ಕಾಳಜಿ ಮಾಡಿಕೊಂಡರೆ (how to ...

IND vs AUS Final: ಭಾರತದ ಸೋಲಿಗೆ, ಆಸೀಸ್ ಗೆಲುವಿಗೆ 5 ಪ್ರಮುಖ ಕಾರಣಗಳು ಇಲ್ಲಿವೆ

ಇಮೇಜ್
  ಅಹಮದಾಬಾದ್​:   ಕಳೆದ 3 ವಿಶ್ವಕಪ್‌ ಟೂರ್ನಿಯಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್‌ ಆಗಿ ಮರೆದಾಡಿದ್ದವು. ಈ ಲೆಕ್ಕಾಚಾರದಲ್ಲಿ ಮತ್ತು ಭಾರತ ತಂಡ ಲೀಗ್​ನಿಂದ ಸೆಮಿಫೈನಲ್​ ತನಕ ತೋರಿದ ಪ್ರದರ್ಶನವನ್ನು ಕಂಡಾಗ ಈ ಸಲ ಕಪ್​ ನಮ್ದೇ ಎಂಬ ನಂಬಿಕೆ ಭಾರತೀಯ ಅಭಿಮಾನಿಗಳಲ್ಲಿತ್ತು. ಆದರೆ ಫೈನಲ್​ ಪಂದ್ಯದಲ್ಲಿ(IND vs AUS Final) ಭಾರತದ ಕನಸಿಗೆ ಆಸ್ಟ್ರೇಲಿಯಾ ಕೊಳ್ಳಿ ಇಟ್ಟಿತು. 6 ವಿಕೆಟ್​ಗಳಿಂದ ಗೆದ್ದು ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತು. ಭಾರತ ಸೋಲಿಗೆ 5 ಪ್ರಮುಖ ಕಾರಣ ಎನೆಂಬುದುವು ಈ ವರದಿಯಲ್ಲಿ ವಿವರಿಸಲಾಗಿದೆ. ಭಾರತ ತಂಡದ ಸೋಲಿಗೆ 5 ಪ್ರಮುಖ ಕಾರಣ 1.  ಆರಂಭಿಕ ವಿಕೆಟ್​ ಬಿದ್ದಾಗ ಒತ್ತಡಕ್ಕೆ ಸಿಲುಕಿ ಆ ಬಳಿಕ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಹೀಗಾಗಿ ದೊಡ್ಡ ಮೊತ್ತ ದಾಖಲಾಗಲಿಲ್ಲ. ಗಿಲ್​, ಅಯ್ಯರ್​, ಸೂರ್ಯಕುಮಾರ್​ ಮತ್ತು ಜಡೇಜಾ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು. 2.  ಅನುಭವಿ ಸ್ಪಿನ್​ ಬೌಲರ್​ ಆರ್​. ಅಶ್ವಿನ್​ ಅವರನ್ನು ಬೆಂಚ್​ ಕಾಯಿಸಿದ್ದು. ಅಶ್ನಿನ್​ ಇದೇ ಮೈದಾನದಲ್ಲಿ ಹಲವು ಟೆಸ್ಟ್​ ಪಂದ್ಯಗಳನ್ನು ಆಡಿದ ಅನುಭವ ಮತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಅವರಿಗೆ ಈ ಪಿಚ್​ ಸಂಪೂರ್ಣ ನೆರವು ನೀಡುತ್ತಿತ್ತು. ಆದರೆ ಅವರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಬ್ಯಾಟಿಂಗ್​ ಆಲ್​ರೌಂಡರ್​ ಕೂಡ ಆಗಿದ್ದ ಅವ...

Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

ಇಮೇಜ್
  ಉಪ್ಪಿನ ಬಗೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಾಗೂ ಅವುಗಳನ್ನು ಬಳಸುವುದರಿಂದ ನಿಮ್ಮ ಅಡುಗೆಯಲ್ಲೂ ಸಾಕಷ್ಟು ವ್ಯತ್ಯಾಸ (Food Tips, kitchen tips) ಕಂಡುಕೊಳ್ಳಬಹುದು.  ಬನ್ನಿ, ಹಾಗಾದರೆ ಬಗೆಬಗೆಯ ಉಪ್ಪುಗಳ (Salt variety) ಬಗೆಗೆ ಸ್ವಲ್ಪ ತಿಳಿಯೋಣ. ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿದೆ. ಉಪ್ಪಿಗಿಂತ ಶ್ರೇಷ್ಠವಾದ ರುಚಿ ಬೇರೆ ಇಲ್ಲ. ಯಾಕೆಂದರೆ, ಯಾವ ರುಚಿಯೂ ಇಲ್ಲದೆ ಅಡುಗೆ ಮಾಡಬಹುದೇನೋ, ಆದರೆ, ಉಪ್ಪಿಲ್ಲದ ಊಟ ಕಷ್ಟ. ಉಪ್ಪು ಹಾಕದ ಅಡುಗೆ ಸಪ್ಪೆಯೇ. ಖಾರ, ಹುಳಿ, ಸಿಹಿಯಿಲ್ಲದೆಯೂ ಊಟ ನಡೆದೀತು. ಆದರೆ ಉಪ್ಪಿಲ್ಲದೆ ಬಹಳ ಕಷ್ಟ. ಅದಕ್ಕಾಗಿಯೇ ಉಪ್ಪಿಗೆ ಅಂಥ ಸ್ಥಾನ. ಉಪ್ಪು ಅಂದ ತಕ್ಷಣ ನಾವು ಬೆಳ್ಳನೆಯ ಪುಡಿ ಎಂದೇ ನೆನೆಸಿಕೊಳ್ಳುತ್ತೇವೆ. ಆದರೆ, ಉಪ್ಪಿನಲ್ಲೂ ಸಾಕಷ್ಟು ವಿಧಗಳಿವೆ. ಬಗೆಬಗೆಯ ಖನಿಜಾಂಶಗಳಿಂದ (mineral rich) ಸಮೃದ್ಧವಾಗಿರುವ ಬೇರೆ ಬೇರೆ ಬಗೆಯ ಉಪ್ಪುಗಳು ದೊರೆಯುತ್ತವೆ. ಇವುಗಳ ಆರೋಗ್ಯ ಲಾಭಗಳೂ (health benefits) ವಿಭಿನ್ನ. ಇಂಥ ಉಪ್ಪಿನ ಬಗೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಾಗೂ ಅವುಗಳನ್ನು ಬಳಸುವುದರಿಂದ ನಿಮ್ಮ ಅಡುಗೆಯಲ್ಲೂ ಸಾಕಷ್ಟು ವ್ಯತ್ಯಾಸ (Food Tips, kitchen tips) ಕಂಡುಕೊಳ್ಳಬಹುದು.  ಬನ್ನಿ, ಹಾಗಾದರೆ ಬಗೆಬಗೆಯ ಉಪ್ಪುಗಳ (Salt variety) ಬಗೆಗೆ ಸ್ವಲ್ಪ ತಿಳಿಯೋಣ. 1. ಟೇಬಲ್‌ ಸಾಲ್ಟ್‌:  ಟೇಬಲ್‌ ಸಾಲ್ಟ್‌ ಎಂಬುದು ಬಹು ಸಾಮಾನ್ಯವಾಗಿ ಎಲ...

Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ

ಇಮೇಜ್
  ಕೆಲವು ಆಹಾರಗಳನ್ನು ಬೇಯಿಸಿ (boiled food) ತಿಂದರೆ ಹೆಚ್ಚು ಪೋಷಕಾಂಶಗಳು ದೇಹ ಸೇರುತ್ತವಂತೆ ಎಂದರೆ ನಂಬುತ್ತೀರಾ? ಹಾಗಾದರೆ ಬನ್ನಿ, ಯಾವೆಲ್ಲ ಆಹಾರಗಳನ್ನು ಬೇಯಿಸಿ ತಿಂದರೆ ಬೆಸ್ಟ್‌ ಎಂಬುದನ್ನು (food tips) ನೋಡೋಣ. ಆಹಾರದ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಗೊಂದಲ ಹೆಚ್ಚಿರುವುದು ಸಹಜ. ಯಾಕೆಂದರೆ, ನಿತ್ಯವೂ ರಾಶಿ ರಾಶಿ ಮಾಹಿತಿಗಳು (food guide) ನಮ್ಮ ಬೆರಳ ತುದಿಗೇ ಸಿಗುತ್ತಿವೆ. ಮಾಹಿತಿಗಳ ಮಹಾಪೂರದಲ್ಲಿ ಓದುಗರು, ಸರಿಯಾದುದೇನು, ತಪ್ಪಿರುವುದು ಎಲ್ಲಿ ಎಂಬ ಬಗ್ಗೆ ಗೊಂದಲಕ್ಕೆ ಬೀಳುವುದು ಸಹಜ. ಹಸಿ ತರಕಾರಿ, ಬೇಯಿಸಿದ ತರಕಾರಿ (boiled vegetables) ವಿಚಾರದಲ್ಲೂ ಬಹುತೇಕರಿಗೆ ಇಂಥದ್ದೇ ಸಮಸ್ಯೆ ಎದುರಾಗುತ್ತದೆ. ಯಾವುದನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರಕ್ಕೆ ಬಂದರೆ, ಕೆಲ ತರಕಾರಿಗಳನ್ನು ಬೇಯಿಸದೆ ಹಸಿ ತಿಂದರೆ ಒಳ್ಳೆಯದು ಎಂಬ ಉತ್ತರ ಸಿಕ್ಕರೆ ಇನ್ನೂ ಕೆಲವನ್ನು ಬೇಯಿಸಿಯೇ ತಿನ್ನಬೇಕು ಎಂಬುದು. ಬೇಯಿಸಿದಾಗ ಪೋಷಕಾಂಶಗಳು (nutrients) ನಷ್ಟವಾಗುತ್ತದೆ ಎಂಬುದನ್ನೇ ನಂಬಿರುವ ಮಂದಿ ಕೆಲವರು. ಆದರೆ, ಕೆಲವು ಆಹಾರಗಳನ್ನು ಬೇಯಿಸಿ (boiled food) ತಿಂದರೆ ಹೆಚ್ಚು ಪೋಷಕಾಂಶಗಳು ದೇಹ ಸೇರುತ್ತವಂತೆ ಎಂದರೆ ನಂಬುತ್ತೀರಾ? ಹಾಗಾದರೆ ಬನ್ನಿ, ಯಾವೆಲ್ಲ ಆಹಾರಗಳನ್ನು ಬೇಯಿಸಿ ತಿಂದರೆ ಬೆಸ್ಟ್‌ ಎಂಬುದನ್ನು (food tips) ನೋಡೋಣ. 1. ಆಲೂಗಡ್ಡ...

Immunity Drinks: ಚಳಿಗಾಲದಲ್ಲಿ ರೋಗ ನಿರೋಧಕತೆ ಹೆಚ್ಚು ಮಾಡಲು ಈ ಪೇಯಗಳನ್ನು ಸೇವಿಸಿ!

ಇಮೇಜ್
  ಚಳಿಗಾಲದಲ್ಲಿ ಕುಸಿಯುವ ನಮ್ಮ ರೋಗ ನಿರೋಧಕ ಶಕ್ತಿಯನ್ನು ಯಾವೆಲ್ಲ ಪೇಯಗಳನ್ನು ಸೇವಿಸುವ ಮೂಲಕ (Immunity Drinks) ಬಲಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ನಿಮಗೆ ಯಾವಾಗಲೂ ಸಣ್ಣ ಸಣ್ಣ ಕಾರಣಗಳಿಗಾಗಿ ಅಥವಾ ಕಾರಣವೇ ಇಲ್ಲದೆ ಹುಷಾರು ತಪ್ಪುತ್ತದೆಯಾ? ಆಗಾಗ ಹೀಗೆ ಆರೋಗ್ಯ ಕೆಡುವುದಕ್ಕೆ ಕಾರಣ ಏನೆಂದೇ ನಿಮಗೆ ಅರ್ಥವಾಗುತ್ತಿಲ್ಲವೇ? ಸಣ್ಣಪುಟ್ಟ ಕೆಮ್ಮು, ಶೀತ, ನೆಗಡಿಯೇ ಆಗಿರಬಹುದು, ಆದರೆ, ಆರೋಗ್ಯ ಕೆಟ್ಟರೆ ಖಂಡಿತವಾಗಿಯೂ ಅದು ಸಣ್ಣ ವಿಚಾರವಲ್ಲ. ಕೆಲವೊಮ್ಮೆ, ಅತಿಯಾದ ಕೆಲಸದ ಒತ್ತಡ, ಪದೇಪದೇ ಕೆಟ್ಟಿರುವ ನಿದ್ದೆ ಇತ್ಯಾದಿಗಳೂ ಕಾರಣವಾಗಿರಬಹುದು. ಪದೇ ಪದೇ ಕೆಡುವ ನಿದ್ದೆಯಿಂದಾಗಿ ನಿಮ್ಮ ರೋಗ ನಿರೋಧಕ ಶಕ್ತಿಯೇ (Immunity) ಕುಗ್ಗಿರಬಹುದು. ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದಾಗಿ ದೇಹ ಸುಲಭವಾಗಿ ಆಗಾಗ ರೋಗಗಳಿಗೆ ತುತ್ತಾಗುತ್ತದೆ. ರೋಗಗಳ ವಿರುದ್ಧ ಹೋರಾಡುವ ಶಕ್ತಿಯೇ ದೇಹದಲ್ಲಿ ಇಲ್ಲದಿದ್ದರೆ, ಆಗಾಗ ಇಂತಹ ಸಮಸ್ಯೆ ಬರದೇ ಇದ್ದೀತೇ ಹೇಳಿ! ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು, ಸೈಟೋಕೈನ್ಸ್‌ ಎಂಬ ಪ್ರೊಟೀನನ್ನು ಬಿಡುಗಡೆ ಮಾಡುತ್ತದೆ. ಈ ಪ್ರೊಟೀನು ನಮ್ಮ ದೇಹಕ್ಕೆ ರೋಗ ಬರದಂತೆ ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿದ್ದೆ ಕಡಿಮೆ (sleep deprivation) ಆದಾಗ ಸಹಜವಾಗಿ ಈ ಪ್ರೊಟೀನಿನ ಉತ್ಪತ್ತಿ ಕಡಿಮೆಯಾಗುತ್ತದೆ. ಆಗ, ರೋಗನಿರೋಧಕ ವ್ಯವಸ್ಥೆಯೇ ಹದಗೆಡುತ್ತದೆ. ಸುಲಭವಾಗಿ ರೋಗಕ್ಕೆ ತುತ್ತಾಗುತ್ತ...
ಇಮೇಜ್
  Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ರಾತ್ರಿ ಹೆಚ್ಚು ಹೊತ್ತು ಕೂರುವುದರಿಂದ ನಿದ್ದೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ನಿದ್ದೆ ಕಡಿಮೆಯಾಗುವುದರಿಂದ ಖಂಡಿತವಾಗಿಯೂ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಾಣಿ ಪಕ್ಷಿಗಳಲ್ಲಿ ನಿಶಾಚರಿಗಳನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ, ಮನುಷ್ಯ ಮಾತ್ರ ಬೆಳಗ್ಗೆ ಕೆಲಸ ಮಾಡಿ, ರಾತ್ರಿ ನಿದ್ದೆ ಮಾಡುವ ದೇಹಪ್ರಕೃತಿಯನ್ನು ಹೊಂದಿದ್ದಾನೆ ಎಂಬುದು ಸರ್ವವಿದಿತ. ಮನುಷ್ಯ, ತನ್ನ ಉದ್ಯೋಗ ಹಾಗೂ ಇತರ ಕೆಲವು ಅಗತ್ಯಗಳಿಗೆ ಅನುಸಾರವಾಗಿ (health tips) ರಾತ್ರಿ ಎಚ್ಚರವಿದ್ದು ಬೆಳಗ್ಗೆ ಮಲಗುವ ರೂಢಿ (sleeping habit) ಮಾಡಿಕೊಂಡರೂ, ನೈಸರ್ಗಿಕವಾಗಿ ಆತನ ದೇಹ ಆರೋಗ್ಯವಾಗಿರಬೇಕಾದರೆ ಆತ ರಾತ್ರಿ ಏಳೆಂಟು ಗಂಟೆ ನಿದ್ದೆ ಮಾಡುವುದು ಅತ್ಯಂತ ಒಳ್ಳೆಯದು. ಮಾನವನ ದೇಹ ಪ್ರಕೃತಿಯೇ ಹಾಗಿದೆ. ಆದರೂ, ಕೆಲವು ಮಂದಿ ಹೇಳುವುದನ್ನು ನೀವು ಕೇಳಿರಬಹುದು. ಪರೀಕ್ಷೆಗೆ ಓದಲು, ಅಧ್ಯಯನ ಮಾಡಲು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಲು ತಡರಾತ್ರಿಯವರೆಗೆ ಎದ್ದಿರುವುದು ಆರಾಮದಾಯಕವಾಗಿರುತ್ತದೆ ಎಂಬುದು ಅವರ ವಾದ. ಆದರೆ, ಇನ್ನೂ ಕೆಲವು ಮಂದಿಗೆ ರಾತ್ರಿ ಬೇಗನೆ ನಿದ್ದೆ ಬಂದು, ಬೆಳಗ್ಗೆ ಬೇಗನೆದ್ದು ಓದುವ, ಬರೆಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಂತಹ ಮಂದಿಗೆ ಬೆಳಗ್ಗೆ ಓದಿದರೇನೇ ಚೆನ್ನಾಗಿ ನೆನಪಿನಲ್ಲುಳಿಯುವುದು. ಆದರೆ, ರಾತ್ರಿ ಹೆಚ್ಚು ಕಾಲ ಕ...
ಇಮೇಜ್
  Fitness Tips: ವಯಸ್ಸಿಗೂ ಮೀರಿದ ಸದೃಢ ಕಾಯಕ್ಕೆ ಮಿಲಿಂದ್‌ ಸೋಮನ್‌ ಫಿಟ್‌ನೆಸ್‌ ಟಿಪ್ಸ್‌! ವಯಸ್ಸನ್ನೂ ಮೀರಿದ ಫಿಟ್‌ನೆಸ್‌ ಹಾಗೂ ಆರೋಗ್ಯ ಪಡೆಯಲು ವ್ಯಾಯಾಮವನ್ನು ಹೇಗೆ ಸ್ವೀಕರಿಸಬೇಕು ಎಂಬ ಬಗ್ಗೆ ಮಿಲಿಂದ್‌ ಸೋಮನ್‌ (Milind Soman) ಅಮೂಲ್ಯ ಸಲಹೆಗಳು (Fitness Tips) ಇಲ್ಲಿವೆ. ಸೂಪರ್‌ ಮಾಡೆಲ್‌, ನಟ ಮಿಲಿಂದ್‌ ಸೋಮನ್‌ (Milind Soman) ಫಿಟ್‌ನೆಸ್‌ನಲ್ಲೂ ದೊಡ್ಡ ಹೆಸರು. ವಯಸ್ಸು 58 ದಾಟಿದರೂ ಈಗಲೂ 30ರ ಯುವಕರನ್ನೂ ನಾಚುವ ಫಿಟ್‌ ದೇಹವನ್ನು ಹೊಂದಿರುವ ಅವರಿಗೆ ಅವರದ್ದೇ ಆದ, ಅಭಿಮಾನಿ ಬಳಗವಿದೆ. ಫಿಟ್‌ನೆಸ್‌ ಗುರಿಗಳನ್ನು (Fitness goals) ಹೊತ್ತ ಯುವ ಹೈದರಿಗೂ ಕೂಡಾ ಮಿಲಿಂದ್‌ ರೋಲ್‌ ಮಾಡೆಲ್‌, ಸ್ಪೂರ್ತಿಯ ಚಿಲುಮೆ! ಸುರಸುಂದರಾಂಗ ಎಂಬ ಹೆಸರು ಪಡೆದಿರುವ ಅವರ ಸದೃಢ ಮೈಕಟ್ಟು, ಕಟ್ಟುಮಸ್ತಾದ ದೇಹ ಸುಖಾಸುಮ್ಮನೆ ಅವರಿಗೆ ದಕ್ಕಿಲ್ಲ. ಅದರ ಹಿಂದೆ ಅವರ ಪರಿಶ್ರಮವಿದೆ. ನಿರಂತರ, ನಿಯಮಿತವಾದ ಶಿಸ್ತುಬದ್ಧ ಜೀವನವಿದೆ. ಆಹಾರ ಕ್ರಮವಿದೆ. ವಯಸ್ಸನ್ನೂ ಮೀರಿದ ಫಿಟ್‌ನೆಸ್‌ ಹಾಗೂ ಆರೋಗ್ಯ ಪಡೆಯಲು ವ್ಯಾಯಾಮವನ್ನು ಹೇಗೆ ಸ್ವೀಕರಿಸಬೇಕು ಎಂಬ ಬಗ್ಗೆ ಅವರ ಅಮೂಲ್ಯ ಸಲಹೆಗಳು (Fitness Tips) ಇಲ್ಲಿವೆ. 1. ವ್ಯಾಯಾಮ ನಿಧಾನವಾಗಿ ಆರಂಭಿಸಿ. ಹೌದು. ನಿಧಾನವೇ ಪ್ರಧಾನ ಎಂಬ ಮಾತನ್ನು ನಾವು ಖಂಡಿತವಾಗಿಯೂ ಜೀವನದಲ್ಲಿ ಎಲ್ಲೆಲ್ಲಿ ಬಳಸಬಹುದೋ ಅಲ್ಲಿಗೆ ಸರಿಯಾಗಿ ಬಳಸಬಹುದು. ಅಂದರೆ, ನೀವು ಫಿಟ್‌ ಆಗಿಲ್ಲದೆ ಇದ್ದರೆ,...

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?

ಇಮೇಜ್
  ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ! ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ-ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಏನಿದರ (benefits of tamarind) ಉಪಯೋಗಗಳು? ಮರದಲ್ಲಿ ಗೆಜ್ಜೆಯಂತೆ ತೂಗುತ್ತಿರುವ ಹುಣಸೆಹಣ್ಣನ್ನು ನೋಡಿ ಬಾಯಲ್ಲಿ ನೀರೂರಿಸಿಕೊಂಡವರೆಷ್ಟು ಮಂದಿಯಿಲ್ಲ? ಮರದ ಗೆಲ್ಲು ಬಗ್ಗಿಸಿ ಜೋತಾಡಿದವರು, ಕೈಗೆಟುಕದೇ ಇದ್ದಿದ್ದಕ್ಕೆ ಕಲ್ಲು ಬೀರಿದವರು, ಕೋಲು ಬೀಸಿದವರು- ಹುಣಸೆ ಹಣ್ಣಿನ ಆಸೆಗಾಗಿ ಮರ ಹತ್ತಿ ಕೊಯ್ದವರು, ಬಿದ್ದು ಕಾಲು ಮುರಿದುಕೊಂಡವರು- ಎಂಥೆಂಥವರಿಲ್ಲ! ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ? ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಇದು ಬರೀ ಬಾಯಿ ರುಚಿಗೆ ತಿನ್ನುವ ಮಾತಲ್ಲ, (benefits of tamarind) ಹೆಚ್ಚಿನ ಉಪಯೋಗಗಳಿವೆ. ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ವ್ಯಂಜನಗಳ ಪೈಕಿ ಹುಣಸೆ ಹಣ್ಣು ಸಹ ಒಂದು. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ತಿಳಿಸಾರು, ಹುಳಿ, ಗೊಜ್ಜು, ಚಟ್ನಿ, ಪುಳಿಯೋಗರೆಗಳಿಂದ ಹಿಡಿದು ಬಹಳಷ್ಟು ಅಡುಗೆಗಳನ್ನು ರುಚಿಗಟ್ಟಿಸುವುದಕ್ಕೆ ಹುಣಸೆಹುಳಿ ಬೇಕೆಬೇಕು. ಇವೆಲ್ಲ ರುಚಿಯ ಮಾತಾಯಿತು. ಇಷ್ಟೊಂದು ವ್ಯಾಪಕವಾಗಿ ಬಳಕೆಯಲ...